ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

AspctStyle/stock.adobe.com

ಸ್ಮರಣೆಯ ಅಭಿಯಾನ 

ಯೇಸು ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ

ಯೇಸು ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ

 ಭೂಮಿಯಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವಷ್ಟರ ಮಟ್ಟಿಗೆ ಯೇಸು ಜನರನ್ನ ಪ್ರೀತಿಸಿದನು. (ಮತ್ತಾಯ 20:28; ಯೋಹಾನ 15:13) ದೇವರ ಸರ್ಕಾರದ ರಾಜನಾಗಿರೋ ಯೇಸು ತನ್ನ ಅಧಿಕಾರವನ್ನ ಬಳಸಿ ‘ಭೂಮಿಯ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡೋ’ ಮೂಲಕ ಜನರ ಮೇಲೆ ತನಗೆಷ್ಟು ಪ್ರೀತಿಯಿದೆ ಅಂತ ಮತ್ತೊಮ್ಮೆ ತೋರಿಸಿಕೊಡ್ತಾನೆ.—ಕೀರ್ತನೆ 46:9.

 ಯೇಸು ಏನು ಮಾಡ್ತಾನೆ ಅಂತ ಬೈಬಲ್‌ನಲ್ಲಿ ತಿಳಿಸಿರೋ ವಿಷಯವನ್ನ ಗಮನಿಸಿ:

  •    “ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ, ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ. ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ, ಬಡವರ ಜೀವವನ್ನ ಕಾಪಾಡ್ತಾನೆ. ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ.”—ಕೀರ್ತನೆ 72:12-14.

 ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು? ಲೂಕ 22:19ರಲ್ಲಿ ಯೇಸು ತನ್ನ ಹಿಂಬಾಲಕರಿಗೆ ತನ್ನ ಮರಣವನ್ನ ನೆನಪಿಸಿಕೊಳ್ಳೋಕೆ ಹೇಳಿದನು. ಅದಕ್ಕೇ ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ಆತನ ಮರಣವನ್ನ ಸ್ಮರಿಸೋಕೆ ಒಟ್ಟಿಗೆ ಸೇರಿ ಬರ್ತಾರೆ. 2024, ಮಾರ್ಚ್‌ 24ರ ಭಾನುವಾರದಂದು ನಡೆಯೋ ಯೇಸುವಿನ ಮರಣದ ಸ್ಮರಣೆಗೆ ನಿಮ್ಮನ್ನ ಆಮಂತ್ರಿಸಲು ಖುಷಿಪಡ್ತೀವಿ.

ಸ್ಮರಣೆ ಎಲ್ಲಿ ನಡೆಯುತ್ತೆ?