ಯೋಹಾನನಿಗೆ ಕೊಟ್ಟ ಪ್ರಕಟನೆ 16:1-21

  • ದೇವರ ಕೋಪ ಇದ್ದ ಏಳು ಬಟ್ಟಲು (1-21)

    • ಭೂಮಿ ಮೇಲೆ (2), ಸಮುದ್ರದ ಮೇಲೆ (3), ನದಿ ಮತ್ತು ಬುಗ್ಗೆಗಳ ಮೇಲೆ (4-7), ಸೂರ್ಯನ ಮೇಲೆ (8, 9), ಕಾಡುಪ್ರಾಣಿಯ ಸಿಂಹಾಸನದ ಮೇಲೆ (10, 11), ಯೂಫ್ರೆಟಿಸ್‌ ಮೇಲೆ (12-16), ಗಾಳಿ ಮೇಲೆ (17-21) ಸುರಿದ್ರು

    • ಹರ್ಮಗೆದೋನಲ್ಲಿ ದೇವರ ಯುದ್ಧ (14, 16)

16  ಆಮೇಲೆ ಪವಿತ್ರಸ್ಥಳದಿಂದ ಒಂದು ದೊಡ್ಡ ಧ್ವನಿ+ ಆ ಏಳು ದೇವದೂತರಿಗೆ “ನೀವು ಹೋಗಿ ಆ ಏಳು ಬಟ್ಟಲಲ್ಲಿ ಇರೋ ದೇವರ ಕೋಪವನ್ನ ಭೂಮಿ ಮೇಲೆ ಸುರೀರಿ”+ ಅನ್ನೋದನ್ನ ಕೇಳಿಸ್ಕೊಂಡೆ.  ಮೊದಲನೇ ದೇವದೂತ ಹೋಗಿ ತನ್ನ ಬಟ್ಟಲಲ್ಲಿ ಇರೋದನ್ನ ಭೂಮಿ ಮೇಲೆ ಸುರಿದ.+ ಆಗ ಕಾಡುಪ್ರಾಣಿಯ+ ಗುರುತು ಇದ್ದವ್ರಿಗೆ, ಅದ್ರ ಮೂರ್ತಿಯನ್ನ+ ಆರಾಧಿಸ್ತಿದ್ದ ಜನ್ರಿಗೆ ತುಂಬ ಉರಿಯೋ ವಾಸಿಯಾಗದ ಹುಣ್ಣಾಯ್ತು.+  ಎರಡನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಸಮುದ್ರಕ್ಕೆ ಸುರಿದ.+ ಆಗ ಸಮುದ್ರ ಸತ್ತ ವ್ಯಕ್ತಿಯ ರಕ್ತದ ತರ ಆಯ್ತು.+ ಅದ್ರಿಂದ ಸಮುದ್ರದಲ್ಲಿದ್ದ ಜೀವಿಗಳೆಲ್ಲ ಸತ್ತುಹೋದ್ವು.+  ಮೂರನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ನದಿಗೆ ಮತ್ತು ನೀರಿನ ಬುಗ್ಗೆಗೆ ಸುರಿದ.+ ಆಗ ನೀರೆಲ್ಲಾ ರಕ್ತ ಆಯ್ತು.+  ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+  ಯಾಕಂದ್ರೆ ಅವರು ಪವಿತ್ರ ಜನ್ರ ರಕ್ತ ಮತ್ತು ಪ್ರವಾದಿಗಳ ರಕ್ತ ಸುರಿಸಿದ್ರು.+ ನೀನು ಅವ್ರಿಗೆ ಕುಡಿಯೋಕೆ ರಕ್ತ ಕೊಟ್ಟೆ.+ ಅವ್ರಿಗೆ ಹಾಗೇ ಆಗಬೇಕಿತ್ತು.”+  ಆಮೇಲೆ ಯಜ್ಞವೇದಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ “ಯೆಹೋವ* ದೇವರೇ, ಸರ್ವಶಕ್ತನೇ,+ ನೀನು ಯಾವಾಗ್ಲೂ ಸರಿಯಾಗೇ ತೀರ್ಪು ಮಾಡ್ತೀಯ. ಅದ್ರಲ್ಲಿ ನ್ಯಾಯ ಇರುತ್ತೆ.”+  ನಾಲ್ಕನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಸೂರ್ಯನ ಮೇಲೆ ಸುರಿದ.+ ಆಗ ಸೂರ್ಯನಿಗೆ ತನ್ನ ಬೆಂಕಿಯಿಂದ ಮನುಷ್ಯರನ್ನ ಸುಟ್ಟು ಹಾಕೋಕೆ ಅನುಮತಿ ಸಿಕ್ತು.  ಆ ಬಿಸಿಗೆ ಜನ ಸುಟ್ಟು ಕರಕಲಾದ್ರು. ಆದ್ರೆ ಅವರು ಈ ಕಷ್ಟಗಳ ಮೇಲೆ ಅಧಿಕಾರ ಇರೋ ದೇವರ ಬಗ್ಗೆ ತಪ್ಪುತಪ್ಪಾಗಿ ಮಾತಾಡಿದ್ರು. ಅವರು ಪಶ್ಚಾತ್ತಾಪ ಪಡಲಿಲ್ಲ. ದೇವರಿಗೆ ಗೌರವ ಕೊಡಲಿಲ್ಲ. 10  ಐದನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಕಾಡುಪ್ರಾಣಿಯ ಸಿಂಹಾಸನದ ಮೇಲೆ ಸುರಿದ. ಆಗ ಅದು ಆಳ್ತಿದ್ದ ಜಾಗ ಎಲ್ಲ ಕತ್ತಲಾಯ್ತು.+ ನೋವು ತಡಿಯೋಕ್ಕಾಗದೆ ಜನ ನಾಲಿಗೆ ಕಚ್ಕೊಂಡ್ರು. 11  ಆದ್ರೆ ಅವ್ರಿಗಾದ ಹುಣ್ಣಿಂದಾಗಿ, ನೋವಿಂದಾಗಿ ಅವರು ಸ್ವರ್ಗದ ದೇವರನ್ನ ಬೈದ್ರು. ಅವರು ಕೊನೆಗೂ ತಮ್ಮ ತಪ್ಪನ್ನ ತಿದ್ಕೊಳ್ಳಲೇ ಇಲ್ಲ. 12  ಆರನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಯೂಫ್ರೆಟಿಸ್‌ ಮಹಾ ನದಿಗೆ+ ಸುರಿದ. ಆಗ ಸೂರ್ಯ ಹುಟ್ಟೋ ದಿಕ್ಕಿಂದ ಬರೋ ರಾಜರಿಗೆ ದಾರಿ ಸಿದ್ಧಮಾಡೋಕೆ+ ಆ ನದಿಯ ನೀರು ಒಣಗಿ ಹೋಯ್ತು.+ 13  ಘಟಸರ್ಪದ+ ಬಾಯಿಂದ, ಕಾಡುಪ್ರಾಣಿಯ ಬಾಯಿಂದ ಮತ್ತು ಸುಳ್ಳು ಪ್ರವಾದಿಯ ಬಾಯಿಂದ ಮೂರು ಅಶುದ್ಧ ಮಾತುಗಳು ಕಪ್ಪೆಗಳ ತರ ಬರೋದನ್ನ ನಾನು ನೋಡ್ದೆ. 14  ನಿಜ ಹೇಳಬೇಕಂದ್ರೆ ಅವು ಕೆಟ್ಟ ದೇವದೂತರು ಕಳಿಸಿದ ಸಂದೇಶಗಳಾಗಿದ್ವು. ಅವು ಅದ್ಭುತಗಳನ್ನ ಮಾಡಿದ್ವು.+ ಅವು ಸರ್ವಶಕ್ತ ದೇವರ ಮಹಾ ದಿನದಲ್ಲಿ+ ಆಗೋ ಯುದ್ಧಕ್ಕಾಗಿ ಭೂಮೀಲಿರೋ ಎಲ್ಲ ರಾಜರನ್ನ ಒಟ್ಟುಸೇರಿಸೋಕೆ ಅವ್ರ ಹತ್ರ ಹೋದ್ವು.+ 15  ಆಮೇಲೆ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ನೋಡು, ನಾನು ಕಳ್ಳನ ತರ ಬರ್ತಿನಿ.+ ನಿದ್ದೆ ಮಾಡದೆ+ ತನ್ನ ಬಟ್ಟೆಯನ್ನ ಜೋಪಾನವಾಗಿ ನೋಡ್ಕೊಳ್ಳೋನು ಖುಷಿಯಾಗಿ ಇರ್ತಾನೆ. ಯಾಕಂದ್ರೆ ಅವನು ಬಟ್ಟೆ ಕಳ್ಕೊಂಡು ಬೆತ್ತಲೆಯಾಗಿ ನಡಿಯಲ್ಲ. ಜನ್ರ ಮುಂದೆ ಅವನಿಗೆ ಅವಮಾನ ಆಗಲ್ಲ.”+ 16  ಆ ಕೆಟ್ಟ ದೇವದೂತರು ರಾಜರನ್ನ ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್‌.*+ 17  ಏಳನೇ ದೇವದೂತ ತನ್ನ ಬಟ್ಟಲಲ್ಲಿ ಇರೋದನ್ನ ಗಾಳಿ ಮೇಲೆ ಸುರಿದ. ಆಗ ಪವಿತ್ರಸ್ಥಳದ ಸಿಂಹಾಸನದ ಕಡೆಯಿಂದ ಒಂದು ದೊಡ್ಡ ಧ್ವನಿ ಕೇಳಿಸ್ತು.+ ಅದೇನಂದ್ರೆ “ಎಲ್ಲ ಮುಗಿತು!” 18  ಆಗ ಗುಡುಗು-ಮಿಂಚು ಬಂತು, ದೊಡ್ಡ ದೊಡ್ಡ ಶಬ್ದಗಳು ಕೇಳಿಸ್ತು. ದೊಡ್ಡ ಭೂಕಂಪ ಆಯ್ತು. ಅದೆಷ್ಟು ಭಯಂಕರವಾಗಿ ಇತ್ತಂದ್ರೆ ಭೂಮಿ ಮೇಲೆ ಮನುಷ್ಯ ಸೃಷ್ಟಿ ಆದಾಗಿಂದ ಇಲ್ಲಿ ತನಕ ಅಂಥ ಭೂಕಂಪ ಆಗೇ ಇರಲಿಲ್ಲ.+ 19  ಆಗ ಮಹಾ ಪಟ್ಟಣ+ ಒಡೆದು ಮೂರು ಭಾಗ ಆಯ್ತು. ದೇಶಗಳ ಪಟ್ಟಣಗಳು ನಾಶ ಆದ್ವು. ದೇವರು ಮಹಾ ಬಾಬೆಲನ್ನ+ ನೆನಪಿಸ್ಕೊಂಡು ತನ್ನ ಮಹಾ ಕೋಪ ಅನ್ನೋ ದ್ರಾಕ್ಷಾಮದ್ಯದ ಬಟ್ಟಲನ್ನ ಅವಳಿಗೆ ಕೊಟ್ಟ.+ 20  ಅಷ್ಟೇ ಅಲ್ಲ ಎಲ್ಲ ದ್ವೀಪಗಳು ಮುಳುಗಿ ಹೋದ್ವು. ಬೆಟ್ಟಗಳೆಲ್ಲ ಮಾಯ ಆದ್ವು.+ 21  ಆಮೇಲೆ ಆಕಾಶದಿಂದ ಜನ್ರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿತು.+ ಒಂದೊಂದು ಕಲ್ಲು ಸುಮಾರು 20 ಕೆಜಿ* ಇತ್ತು. ಆ ಆಲಿಕಲ್ಲಿನ ಕಷ್ಟದಿಂದ+ ಜನ್ರಿಗೆ ತುಂಬ ನಷ್ಟ ಆಗಿದ್ರಿಂದ ಅವರು ದೇವರನ್ನ ಬೈದ್ರು.

ಪಾದಟಿಪ್ಪಣಿ

ಇದ್ರರ್ಥ “ಮೆಗಿದ್ದೋ ಬೆಟ್ಟ.”
ಅಕ್ಷ. “ಒಂದು ತಲಾಂತು.”